Kalabandhu Foundation
Determined for a Social Reform for a better Society
ಕಲಾಬಂಧು ಫೌಂಡೇಶನ್
ಉತ್ತಮ ಸಮಾಜಕ್ಕಾಗಿ ಸಮಾಜ ಸುಧಾರಣೆಗೆ ಬದ್ಧ


Founded by Mr. H. Narasimharaju, a recipient of the prestigious Kempegowda award, KALABANDHU Foundation is a non-profit organization dedicated to providing education, skill Development training, healthcare, environment awareness, and cultural preservation to underprivileged communities.
ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಯಿಂದ ಸನ್ಮಾನಿತರಾದ ಶ್ರೀ ಹೆಚ್ ನರಸಿಂಹರಾಜು ಅವರಿಂದ ಸ್ಥಾಪಿಸಲ್ಪಟ್ಟ ಕಲಾಬಂಧು ಫೌಂಡೇಶನ್ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ತರಬೇತಿ, ಆರೋಗ್ಯ ರಕ್ಷಣೆ, ಪರಿಸರ ಜಾಗೃತಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಯನ್ನು ಒದಗಿಸಲು ಸ್ಥಾಪಿಸಲಾಗಿರುವ ಸಾಮಾಜಿಕ ಸಂಸ್ಥೆಯಾಗಿದೆ.
KALABANDHU FOUNDATION can actively support temples and religious institutions through the following service initiatives:
1. Religious & Cultural Programs
Support temple festivals, Rathotsavas, Jatras, and special religious events. Organize Bhajans, devotional music programs, spiritual discourses, and cultural activities to preserve and promote Indian heritage.
2. Annadana & Prasadam Services
Support Annadana initiatives and Prasadam distribution through financial assistance, volunteer participation, and community involvement.
3. Cleanliness & Environmental Initiatives
Conduct temple cleanliness drives, tree plantation programs, and promote eco-friendly practices within temple premises and events.
4. Health & Wellness Programs
Organize free health camps, wellness awareness programs, yoga, meditation, and preventive healthcare initiatives for devotees and local communities.
5. Education & Social Welfare Activities
Provide educational materials, scholarships, and recognition for deserving students. Conduct value-based education and personality development programs.
6. Infrastructure & Facility Development
Support drinking water facilities, seating arrangements, sanitation, accessibility improvements, and other essential amenities for devotees.
7. Volunteer & Community Engagement
Encourage youth participation in service activities, build volunteer networks, and promote social responsibility, unity, and community welfare.
Mission Statement
"To serve society through Dharma, Culture, Education, Health, and Community Welfare, while preserving spiritual values and promoting a healthier, happier, and more harmonious society." – KALABANDHU FOUNDATION.
ಕಲಾಬಂಧು ಫೌಂಡೇಶನ್ ಮೂಲಕ ದೇವಸ್ಥಾನಗಳ ಕಾರ್ಯಕ್ರಮಗಳಿಗೆ ಕೈಜೋಡಿಸಬಹುದಾದ ಕೆಲವು ಸೇವಾ ಚಟುವಟಿಕೆಗಳು:
1. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ
ದೇವಾಲಯದ ವಾರ್ಷಿಕೋತ್ಸವ, ಬ್ರಹ್ಮರಥೋತ್ಸವ, ಜಾತ್ರೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಸಹಾಯ. ಭಜನೆ, ಕೀರ್ತನೆ, ಹರಿಕಥೆ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
2. ಅನ್ನದಾನ ಮತ್ತು ಪ್ರಸಾದ ವಿತರಣೆ
ಅನ್ನದಾನ ಕಾರ್ಯಕ್ರಮಗಳಿಗೆ ಆರ್ಥಿಕ ಮತ್ತು ಸ್ವಯಂಸೇವಕರ ಸಹಾಯ, ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆಯಲ್ಲಿ ಸಹಕರಿಸುವುದು.
3. ಸ್ವಚ್ಛತಾ ಅಭಿಯಾನ
ದೇವಸ್ಥಾನ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತಾ ಕಾರ್ಯ. ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮಗಳು.
4. ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳು
ಉಚಿತ ಆರೋಗ್ಯ ತಪಾಸಣಾ ಶಿಬಿರಗಳು. ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳು. ಯೋಗ ಮತ್ತು ಧ್ಯಾನ ಶಿಬಿರಗಳ ಆಯೋಜನೆ.
5. ಶಿಕ್ಷಣ ಮತ್ತು ಸಮಾಜಮುಖಿ ಸೇವೆಗಳು
ದೇವಸ್ಥಾನದ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಪಾಠೋಪಕರಣಗಳ ವಿತರಣೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರೋತ್ಸಾಹ. ಮೌಲ್ಯಾಧಾರಿತ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು.
6. ಮೂಲಸೌಕರ್ಯ ಅಭಿವೃದ್ಧಿ
ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ಪೀಠೋಪಕರಣಗಳ ಒದಗಿಕೆ. ಭಕ್ತರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಸಹಕಾರ.
7. ಸ್ವಯಂಸೇವಕರ ಜಾಲ ನಿರ್ಮಾಣ
ಯುವಕರನ್ನು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
ದೇವಸ್ಥಾನ ಮತ್ತು ಸಮಾಜದ ನಡುವೆ ಸೇವಾ ಸೇತುವೆಯಾಗಿ ಕಾರ್ಯನಿರ್ವಹಿಸುವುದು.
ಕಲಾಬಂಧು ಫೌಂಡೇಶನ್ನ ಧ್ಯೇಯ
"ಧರ್ಮ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯ ಮೂಲಕ ಸುಸ್ಥಿರ ಹಾಗೂ ಸದೃಢ ಸಮಾಜ ನಿರ್ಮಾಣ."



ಮಹಿಳಾ ದಿನಾಚರಣೆ - 26 ಪ್ರಯುಕ್ತ ಗಣ್ಯರ ನುಡಿಗಳು
Guests' Address on account of Women's Day-26
Felicitation of Women Poura Karmikas and women achievers from various sectors on account of celebrating International Women's Day. A big salute to you all as well for your continued support. A glimpse of yesterday's program with these photos for you.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರು ಹಾಗೂ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸುವ ಸಾರ್ಥಕ ಕಾರ್ಯಕ್ರಮ ನಡೆಯಿತು.
ನಿಮ್ಮ ಅಮೂಲ್ಯ ಬೆಂಬಲಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಕಾರ್ಯಕ್ರಮದ ಕೆಲವು ಸ್ಮರಣೀಯ ಕ್ಷಣಗಳನ್ನು ಈ ಛಾಯಾಚಿತ್ರಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಕಲಾಬಂಧು ಸಂಸ್ಥೆಯಿಂದ ಯುವ ಸಾಂಸ್ಕೃತಿಕ ಪ್ರತಿಭೋತ್ಸವ - ೨೦೨೬
ಯುವ ಸಾಂಸ್ಕೃತಿಕ ಪ್ರತಿಭೋತ್ಸವ - ೨೦೨೬ - ಈ ಕಾರ್ಯಕ್ರಮವನ್ನು ದೆಹಲಿಯ ಉಪ ಪೊಲೀಸ್ ಆಯುಕ್ತ ಡಾ. ಶಂಕರ್ ಅವರು ಔಪಚಾರಿಕವಾಗಿ ಉದ್ಘಾಟಿಸಿದರು, ಇದು ಒಂದು ಪರಿಣಾಮಕಾರಿ ಮತ್ತು ಸಾಮಾಜಿಕವಾಗಿ ಪ್ರಸ್ತುತವಾದ ಕಾರ್ಯಕ್ರಮದ ಆರಂಭವನ್ನು ಸೂಚಿಸಿತು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಮತ್ತು ಮತದಾರರ ನೋಂದಣಿ ಅಧಿಕಾರಿ ಶ್ರೀ ಈಶ್ವರ್ ಎಸ್. ರಾಯುಡು; ಮಾಧ್ಯಮ ಮತ್ತು ಉಪಗ್ರಹ ಪ್ರಸಾರ ಮಂಡಳಿಯ ಚೇರ್ಮನ್ ಡಾ. ಬಿಕ್ಕಿ ಬಂಗಾರಿ; ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ಡಾ. ನಳಿನಾಕ್ಷಿ ಸಣ್ಣಪ್ಪ; ಮಾರ್ದನಿ ಕನ್ನಡ ದಿನಪತ್ರಿಕೆಯ ಸಂಪಾದಕ ಶ್ರೀ ಕೆ. ಸಿ. ಶಿವರಾಮಯ್ಯ; ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ತಾರಿಹಳ್ಳಿ ಹನುಮಂತಪ್ಪ; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶ್ರೀ ಎನ್. ಮಾಲತೇಶ್; ಲೆಕ್ಕಪರಿಶೋಧಕ ಶ್ರೀ ಕೆ. ಎಸ್. ನಿಖಿಲ್ ಸೇರಿದಂತೆ ಪ್ರಮುಖ ಅತಿಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಘನತೆ ಹೆಚ್ಚಿಸಿದರು.
ಇದೇ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಟ ಡಿಂಗ್ರಿ ನಾಗರಾಜ್ ಮತ್ತು ಹಿರಿಯ ರಂಗಭೂಮಿ ಕಲಾವಿದ ಹರೀಶ್ ರವರಿಗೆ ವೖಧ್ಯಕೀಯ ವೆಚ್ಚದ ಸಹಾಯಕ್ಕಾಗಿ ಆರ್ಥಿಕ ನೆರವು ನೀಡಲಾಯಿತು.
ಶೈಕ್ಷಣಿಕದೊಂದಿಗೆ ಹಲವಾರು ರೀತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟ ಪ್ರತಿಭಾನ್ವಿತ ಕು|| ಬಿ.ಕೆ. ರೋಹಶ್ರೀ ಕುಸ್ತಿ ಸ್ಪರ್ಧಾ ಪದಕ ವಿಜೇತ ವಿದ್ಯಾರ್ಥಿನಿ, ಕು|| ಎ.ಆರ್. ಲೇಖನ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವಿದ್ಯಾರ್ಥಿನಿ, ಕು|| ಟಿ.ಎನ್. ಜಾಹ್ನವಿ, ಪ್ರತಿಭಾನ್ವಿತ ವಿಧ್ಯಾರ್ಥಿನಿ, ಕು|| ಐಶ್ವರ್ಯ,ಪ್ರತಿಭಾನ್ವಿತ ವಿಧ್ಯಾರ್ಥಿನಿ ಇವರಿಗೆ ವಿಶೇಷ ಬಾಲ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಜೀವ್ ಗಾಂಧಿ ಆಯುಷ್ ವಿಶ್ವವಿದ್ಯಾಲಯದ ಡೀನ್ ಡಾ. ಶಾಹಿದಾ ಬಾನು, ಯುವ ಲೆಕ್ಕಪರಿಶೋಧಕ ಕೆ. ಎಸ್. ನಿಖಿಲ್, ಸಮಾಜ ಸೇವಕಿ ಎಂ. ವಿ. ಪೂರ್ಣಿಮಾ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸದಸ್ಯೆ ಮಾಲತೇಶ್ ಅವರು ಗೌರವಾನ್ವಿತ ಅತಿಥಿಗಳೊಂದಿಗೆ ಸಮಾರಂಭವನ್ನು ಅಲಂಕರಿಸಿದರು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ - +91 99458 99946
Kalabandhu Foundation, orchestrated a Youth Cultural Festival - 2026
The program was formally inaugurated by Dr. Shankar, Deputy Commissioner of Police, Delhi, marking the beginning of an impactful and socially relevant event. The occasion was graced by eminent chief guests including Shri Easwar S. Rayadhu, Revenue Officer and Registrar of Voters; Dr. Bickey Bangari, Chairman, Council for Media and Satellite Broadcasting; Dr. Nalinakshi Sannappa, Founder President of Karnataka Arya Ediga Mahila Sangh; Shri K. C. Shivaramaiah, Editor of Mardani Kannada Daily; Dr. Tarihalli Hanumanthappa, Professor at Hampi Kannada University; Shri N. Malatesh, Rajya Parishad Member of the Karnataka State Government Employees Association; and Shri K. S. Nikhil, Auditor, whose presence added dignity and significance to the program.
At the same program, Senior film actor Dingri Nagaraj and senior theatre artist Harish were given financial assistance to help with medical expenses.
Talented students who have made a name for themselves at the state and national level in various ways along with academics were Ms.B.K. Rohasree, Wrestling Competition Medal Winner, Ms.A.R. Lekhana, India Book of Records Student, Ms.T.N. Jahnavi, Talented Student, Ms.Aishwarya, a talented student, were honored with a special Bal Pratibha Puraskar.
Rajiv Gandhi AYUSH University Dean, Dr. Shahida Banu, Young Auditor, K. S Nikhil, Social Worker, M. V Purnima, State Government Employees Association Executive Member Malatesh joined the esteemed guests to grace the occasion
For more information - Call - +91 99458 99946
Guests Graced the Occasion



Students Recognised and Rewarded
Cultural Programs
KALABANDHU Foundation is a non-profit organization dedicated to providing education, skill Development training, healthcare, environment awareness, and cultural preservation to underprivileged communities.
ಕಲಾಬಂಧು ಫೌಂಡೇಶನ್ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ತರಬೇತಿ, ಆರೋಗ್ಯ ರಕ್ಷಣೆ, ಪರಿಸರ ಜಾಗೃತಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಯನ್ನು ಒದಗಿಸಲು ಸ್ಥಾಪಿಸಲಾಗಿರುವ ಸಾಮಾಜಿಕ ಸಂಸ್ಥೆಯಾಗಿದೆ.



We empower unemployed youths and women by offering skill training programs that enhance their employability and/or enable them to become self- employed and financially independent.
ನಿರುದ್ಯೋಗಿ ಯುವಕರು ಮತ್ತು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ನಾವು ಅವರ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತೇವೆ ಮತ್ತು/ಅಥವಾ ಅವರಿಗೆ ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುತ್ತೇವೆ
Skill Development Initiatives
ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು




Our healthcare initiatives focus on providing medical support, health camps, and awareness campaigns to improve the well-being of underprivileged communities.
ನಮ್ಮ ಆರೋಗ್ಯ ರಕ್ಷಣೆಯ ಉಪಕ್ರಮಗಳು, ಸೌಲಭ್ಯ ವಂಚಿತ ಸಮುದಾಯಗಳ ಯೋಗಕ್ಷೇಮವನ್ನು ಸುಧಾರಿಸಲು ವೈದ್ಯಕೀಯ ಬೆಂಬಲ, ಆರೋಗ್ಯ ಶಿಬಿರಗಳು ಮತ್ತು ಜಾಗೃತಿ ಅಭಿಯಾನಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.
Healthcare Initiatives
ಆರೋಗ್ಯ ಕಾರ್ಯಕ್ರಮಗಳು


Education Initiatives
ಶಿಕ್ಷಣ ಕಾರ್ಯಕ್ರಮಗಳು
We provide access to quality education through scholarships, school infrastructure development, and educational workshops for children in need.
ನಾವು ವಿದ್ಯಾರ್ಥಿವೇತನಗಳು, ಶಾಲಾ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಗತ್ಯವಿರುವ ಮಕ್ಕಳಿಗೆ ಶೈಕ್ಷಣಿಕ ಕಾರ್ಯಾಗಾರಗಳ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸುತ್ತೇವೆ.


Corpus Fund
ದತ್ತಿ ನಿಧಿ
Your Enduring Contribution for Enduring Service
KALABANDHU Foundation has established a Corpus Fund to ensure the long-term sustainability of its initiatives in education, healthcare, skill development, women empowerment, senior citizen welfare, environmental conservation, and various community development programmes. Your contribution will not only address today's needs but also strengthen our mission of creating a lasting impact for generations to come.
We warmly invite philanthropists, well-wishers, and socially conscious individuals and organizations to contribute to the Corpus Fund, enabling the Foundation to continue its humanitarian work with stability, sustainability, and greater reach.
Your Contribution Will Support
Education and Student Support
Healthcare and Wellness Programmes
Skill Development and Youth Empowerment
Women Empowerment Initiatives
Senior Citizen Welfare Programmes
Environmental Conservation
Other Community Welfare and Humanitarian Services
Make a Difference Today
Contribute to the KALABANDHU Foundation Corpus Fund and become a part of a lasting legacy of service. Together, let us build a healthier, happier, empowered, and self-reliant society for generations to come.
ಶಾಶ್ವತ ಸೇವೆಗೆ ನಿಮ್ಮ ಶಾಶ್ವತ ಕೊಡುಗೆ
ಕಲಾಬಂಧು ಫೌಂಡೇಶನ್ನ ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಹಿರಿಯ ನಾಗರಿಕರ ಕಲ್ಯಾಣ, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ದತ್ತಿ ನಿಧಿ ಸ್ಥಾಪಿಸಲಾಗಿದೆ. ನಿಮ್ಮ ದೇಣಿಗೆ ಇಂದಿನ ಅಗತ್ಯಗಳನ್ನು ಪೂರೈಸುವುದಷ್ಟೇ ಅಲ್ಲ, ಮುಂದಿನ ಪೀಳಿಗೆಗಳಿಗೂ ಆಶಾಕಿರಣವಾಗುವ ಶಾಶ್ವತ ಸೇವೆಗೆ ಬಲ ನೀಡುತ್ತದೆ. ಸಂಸ್ಥೆಯ ದೀರ್ಘಕಾಲೀನ ಸಮಾಜಸೇವಾ ಚಟುವಟಿಕೆಗಳಿಗೆ ದತ್ತಿ ನಿಧಿ ನಿರ್ಮಿಸಲು ದಾನಿಗಳ ಸಹಕಾರವನ್ನು ಕೋರುತ್ತೇವೆ.
ನಿಮ್ಮ ಸಹಕಾರದಿಂದ
ಶಿಕ್ಷಣಕ್ಕೆ ಬೆಂಬಲ
ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳು
ಕೌಶಲ್ಯಾಭಿವೃದ್ಧಿ ಮತ್ತು ಯುವ ಸಬಲೀಕರಣ
ಮಹಿಳಾ ಸಬಲೀಕರಣ ಕಾರ್ಯಕ್ರಮಗಳು
ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳು
ಪರಿಸರ ಸಂರಕ್ಷಣೆ
ಇತರೆ ಸಮಾಜಮುಖಿ ಸೇವಾ ಕಾರ್ಯಕ್ರಮಗಳು
ಇಂದೇ ದತ್ತಿ ನಿಧಿಗೆ ನಿಮ್ಮ ಅಮೂಲ್ಯ ಕೊಡುಗೆ ನೀಡಿ – ಆರೋಗ್ಯಕರ, ಸಂತೋಷದ, ಸಶಕ್ತ ಮತ್ತು ಸ್ವಾವಲಂಬಿ ಸಮಾಜ ನಿರ್ಮಾಣದಲ್ಲಿ ನಮ್ಮೊಂದಿಗೆ ಕೈಜೋಡಿಸಿ.
Social Media
Our Bank Details
Bank: Canara Bank
SB Account No: 2529101024586 IFSC Code No.: CNRB0002529 Branch: Basaveshwaranagar
Bengaluru - 560079
All Types of Online Payments are accepted


